ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೇರಿಪಾರಟಮ್ ಕಾರ್ಡಿಯೊಮಯೋಪತಿ .

ಪೇರಿಪಾರಟಮ್ ಕಾರ್ಡಿಯೊಮಯೋಪತಿ, ಈ ಕಾಯಿಲೆ ಗರ್ಭಿಣಿಯಾರಿಗೆ ಬರುವ  ಕಾಯಿಲೆ. ಈ ಕಾಯಿಲೆ ಅಷ್ಟು ಸಾಮಾನ್ಯವಾಗಿ ಕಂಡುಬರುವದಲ್ಲಿ, 1500 ರಿಂದ 2000  ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಬರುತ್ತದೆ. ಈ ಕಾಯಿಲೆ ಕಾಣುವುದು ತುಂಬು ಗರ್ಭಿಣಿಯಲ್ಲಿ, ಮತ್ತು ಮಗು ಜನನವಾದು ಮೇಲೆ 6 ತಿಂಗಳವರೆಗೆ ತಾಯಿಗೆ ಈ  ಕಾಯಿಲೆ ಬರಬಹುದು. ಹೃದಯ ರಕ್ತವನ್ನು  ಒತ್ತಿ ನೂಕುತ್ತದೆ, ಈ ಕಾಯಿಲೆಯಲ್ಲಿ ಹೃದಯದ ಒತ್ತಿ ನೂಕುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ

ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು

ಇಮೇಜ್
ಇತ್ತೀಚಿನ ದಿನಗಳ್ಳಲ್ಲಿ ಕಿಡ್ನಿ ಟ್ರಾನ್ಸಪ್ಲಾಂಟೇಶನ್ ವಿಷಯದಲ್ಲಿ, ವೈದ್ಯರ ತಪ್ಪು ನಡವಳಿಕೆಗಳ ಬಗ್ಗೆ ವಾರ್ತೆಗಳು ಬರುತ್ತಿವೆ. ಹಿಂತ ವಾರ್ತೆಗಳು ಬರುವುದು ಮೊದಲೆನೆಯ ಬಾರಿ ಅಲ್ಲಾ.  ಹಿಂತ ವಾರ್ತೆಗಳಿಂದಾ ಸಾರ್ವಜನಿಕರಲ್ಲಿ ಒಂದು ರೀತಯ ಭಯದ ವಾತಾವರಣ ಉಂಟಾಗಿದೆ. ಎಷ್ಟೋ ಸಾರಿ ರೋಗಿಗಳು ಕಿಡ್ನಿಗೆ ಸಮಬಂಧವಿಲ್ಲದ ರೋಗದಲ್ಲೂ ಸಹ, ವೈದ್ಯರು ತಮ್ಮ ಕಿಡ್ನಿಯನ್ನು ಕದಿಬಹುದೆಂದು ಸಂದೇಹವನ್ನು ವೈಕ್ತಪಡಿಸುತ್ತಾರೆ. 

ಹೃದಯರೋಗದ ಹೊಗೆ

ಇಮೇಜ್
ಸರ ! 25 ವರ್ಷದ ಹುಡುಗ , ಅವನು   ತುಂಬಾ ಎದೆನೋವಿನಿಂದಾ ನರಳುತ್ತಿದ್ದಾನೆ . ಎಂದು ನನಗೆ ದೂರವಾಣಿ ಬಂತು . ಇಸಿಜಿ ಮಾಡಿದೆನಾಪಾ ಎಂದು ನಾನು ಕೇಳಿದೆ ?. ಮಾಡಿದ್ದೇನೆ ಸರ , ಆಚೆಕಡೆಯಿಂದ ಫೋನಿನಲ್ಲಿ ಉತ್ತರ , ಹಾಗಾದರೆ whatsapp ನಲ್ಲಿ ಮೆಸೇಜ ಕಳಿಸು ಅಂತ ನಾ ಹೇಳಿದೆ . ಆಗಲಿ ಅಂತ ಆಚೆಕಡೆಯಿಂದ .

ಪ್ರೊಪೆಸರ ಡಾ|| ಬಿ ಎಮ್ ಹೆಗ್ಗಡೆ ಅವರಿಗೆ ತೆರದ ಅಂಚೆ,

ಮಾನ್ಯ ನನ್ನ ಗುರುಗಳ  ಗುರುಗಳಾದ Dr B. M Hegade ಅವರೆ  ತಾವು ಹಿರಿಯರು ಮತ್ತು ಮಹಾ ಚಿಂತಕರು . ತಾವು ನನ್ನ ಗುರುಗಳ ಗುರುಗಳು . ತಮ್ಮ ಬಗ್ಗೆ ವೈದ್ಯಕಿಯ ಕ್ಶೆತ್ರದಲ್ಲಿ ಸಾಕಸ್ಟ ಒಳ್ಳೆಯ ಹೆಸರು ಇದೆ . ಇತ್ತಿಚಿಗೆ ನನಗೆ ನನ್ನ ಒಂದು ರೋಗಿ ತಾವ ದೂರದರ್ಶನದಲ್ಲಿ ಸಂರ್ದರಶನ  ನೀಡಿದ ಒಂದು ಕಾರ್ಯಕ್ರಮವನ್ನು ನನ್ನ ಮೂಬೈಲ ಪೊನಿಗೆ ವಾಟ್ಸೆಪ ಮುಲಕ ಕಳುಹಿಸಿಕೊಟ್ಟಿರುವರು . ಅದನ್ನು ನೊಡಿದ ಮೇಲೆ ನನಗೆ ಕೆಲವೋಂದು ವಿಷಯಗಳ ಬಗ್ಗೆ ಬಹಳ ತಪ್ಪುನ್ನು ತಾವು ಹೆಳುತ್ತಿರುವಿರಿ ಎಂದು   ಅನಿಸುತ್ತಿದೆ .

ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ

ನಾನು ಒಬ್ಬ ಹೃದಯ ತಜ್ಞ ನನಗು ಮತ್ತು ಕಿಡ್ನಿಗು ಎನು ಸ್ಂಬದ ಅಂತಿರಾ! ಮುಂದೆ ನೀವೆ ಓದಿ, ನೀಮಗೆ ಗೋತ್ತಾಗುತ್ತೆ,   ಇದು ನಡೆದ ಸತ್ಯ ಘಟನೆ . ಕೇಲವು ತಿಂಗಳಿನ ಹಿಂದೆ ನನ್ನಲ್ಲಿ ಒಬ್ಬ ರೋಗಿ ಬಂದ್ದಿದ್ದಾ. ಬಂದ ರೋಗಿ ವೀಪರಿತ ಎದೆ ನೋವಿನಿಂದ ಬಳಲುತ್ತಿದ್ದಾ.

ಸಾವು ಮತ್ತು ವೆಂಟಿಲೇಟರ.

ಹುಟ್ಟು ಅಕಸ್ಮಿಕ ಆದರೆ ಸಾವು ನೀಶ್ಚಿತಾ ಅಂತ ಡಾ. ರಾಜಕುಮಾರರು ಯಾವುದೊ ಚಲನಚೀತ್ರದಲ್ಲಿ ಹೇಳಿದ ನೇನಪು. ಈ ಸಂಚಿಕೆಯಲ್ಲಿ ನಾನು ಸಾವಿನ ಬಗ್ಗೆ ಬರೇಯುತ್ತಿದೇನೆ. ಹಾಗೆ ಏಕೆ ಎಂದು ವೀಚಾರಿಸುತ್ತಿರುವಿರಾ? ನೀನ್ನೆ ನನ್ನ ಬಳಿಯೊಂದು ಬೇರೆ ಆಶ್ಪತ್ರೆಯಲ್ಲಿ ಮೃತಗೊಂಡ ರೋಗಿಯ ಗಂಡ ಬಂದ್ದಿದ್ದಾ. ಆತ ನನಗೆ ಒಂದು ಪ್ರಶ್ನೆಯನ್ನು ಕೇಳಿದ. ಅದೇನಂದರೆ , ಅವನ ಹೆಂಡತಿಯನ್ನು   ಆ ಆಶ್ಫತ್ರೆಯವರು ಸತ್ತಮೆಲೂ, ಒಂದು ದಿವಸ ವೆಂಟಿಲೆಟರ ಮೆಲೆ ಸುಮ್ಮನೆ ಇಟ್ಟಿರಬಹದಾ, ಎಂದು ತನ್ನಲಿರುವ ಸಂದೆಹವನ್ನು ವೇಕ್ತಪಡಿಸಿದಾ.

ಹೃದಯ ಸ್ತಬ್ದತೆ (ಕಾರ್ಡಿಯಾಕ ಅರೆಸ್ಟ್)

ನಮ್ಮ ದೇಹದಲ್ಲಿ ಹೃದಯವು ಒಂದು ನೀಮಿಷಕ್ಕೆ 60 ರಿಂದ 100 ಸಲ ಬಡಿದು ಕೊಳ್ಳುತ್ತದೆ. ಹೃದಯ ತನ್ನ ಬಡಿತವನ್ನು ಸಂಪೂರ್ಣವಾಗಿ ನಿಲ್ಲಿಸದರೆ ಅದಕ್ಕೆ ಕಾರ್ಡಿಯಾಕ ಅರೆಸ್ಟ್ ಅಥವಾ ಹೃದಯ ಸ್ತಬ್ದತೆ ಎಂದು ಕರೆಯುತ್ತಾರೆ. ಕಾರ್ಡಿಯಕ ಅರೆಸ್ಟ್ ಆದ ವ್ಯಕ್ತಿ ಕೆಳಗೆ ಉರಳುತ್ತಾನೆ, ಆ ವೈಕ್ತಿಯ ರಕ್ತಾನಾಡಿಯನ್ನು ಪರಿಕ್ಷಿಸಿದರೆ ಅದು ತನ್ನ ಬಡಿತವನ್ನು ನಿಲ್ಲಿಸಿರುತ್ತದೆ, ಎದೆಗೆÉವಾಲಿ ಆಲಿಸಿದರೆ ಹೃದಯದ ಬಡಿತದ ಶ್ಬಬ್ದ ಕೇಳಿಸುವದಿಲ್ಲಾ. ಕೇಲವೆ ನಿಮಿಷದಲ್ಲಿ ಉಸಿರಾಟವು ನಿಲ್ಲುತ್ತದೆ. ಮತ್ತೆ ಆ ವ್ಯಕ್ತಿ ಜ್ಞಾಣವನ್ನು ಕಳೆದುಕೊಳ್ಳುತ್ತಾನೆ. ತಕ್ಷಣ ಉಪಚಾರ ಸೀಗದಿದ್ದರೆ ಪ್ರಾಣವು ಹೊಗಬಹುದು,

ಹೃದಯಘಾಥ ಮತ್ತು ಫ್ರಥಮ ಚಿಕಿಸ್ತೆ (First aid)

ತಾವೆಲ್ಲುರು ಕೇಲವು ಚಲನಚಿತ್ರಗಳನ್ನು ನೋಡಿರುತ್ತೀರು . ಅದರಲ್ಲಿ  ಒಬ್ಬಂಟಿಗನೇ  ಇದ್ದ ವೈಕ್ತಿಗೆ ಎದುನೊವು ಕಾಣಿಸುತ್ತದೆ . ಆದರೆ ಆ ವೈಕ್ತಿಗೆ ಒಂದು ಸಣ್ಣ ಪೊಟ್ಟಣದಲ್ಲಿ ಇದ್ದ ಮಾತ್ರೆಗಳನ್ನು   ತೆಗೆದುಕೊಳ್ಳಲು ಆಗುವದಿಲ್ಲಾ , ಅದುದರಿಂದ ಆ ವೈಕ್ತಿ ಸಾವನ್ನಪ್ಪುತ್ತಾನೆ . ಈ ವಿಷಯವನ್ನು ಇಲ್ಲಿ ಎಕೆ ನಾನು ಬರೆಯುತ್ತಿದೇನೆ ಎಂದು ಯೊಚಿಸುತ್ತಿರುವಿರಾ? . ನಿಜ ಜೀವನದಲ್ಲಿ ಆತನಿಗೆ ಆ ಮಾತ್ರೆ ಕೈಗೆಟಕಿದ್ದರೆ ಆ ವೈಕ್ತಿ ಬದುಕಿ ಉಳಿಯುತ್ತಿದ್ದನಾ ?. ಜನಸಾಮನ್ಯಾಗಿ ಹೃದಯಘಾಥವಾದಗ ಪ್ರಥಮ ಚಿಕಿಸ್ತೆ ಎನೆನೆ ಮಾಡಬೇಕು , ಯಾವುದಾದರು ಮಾತ್ರೆ ಕೊಡಬಹುದಾ ಮತ್ತು ಆ ವೈಕ್ತಿಯನ್ನು ಆಸ್ಪತ್ರೆಗೆ ಹೇಗೆ ಕರೆದುಕೋಂಡು ಹೋಗಬೆಕು ಎಂಬುದನ್ನು ತಿಳಿದುಕೊಳ್ಳುವುದೆ ಈ ಲೇಖಣದ ಉದ್ದೇಶ .

ತೀರ್ವ ಹೃದಯಘಾಥ ಯುವಕರಲ್ಲಿ

ಮೊನ್ನೆ ಮುಂಜಾನೆ 4.50 ಘಂಟೆಗೆ ಕಿಮ್ಸ ವೈದ್ಯಕಿಯ ಅಧಿಕ್ಷಕರಿಂದ ದೂರವಾಣಿ ಬಂತು 24 ವರ್ಷದ ವಿದ್ಯಾರ್ಥಿ ಎದೆ ನೋವಿನಿಂದ ಎಮರ್ಜೆನ್ಸಿ ವಾರ್ಡಗೆ ಬಂದದ್ದಾನೆ ಕಾಣಲು ತಿಳಿಸಿದರು. ತಕ್ಷಣ ನಾನು ಅಲ್ಲಿಗೆ ಧಾವಿದಸಿದೆ, ಅಲ್ಲಿ ಆ ವಿದ್ಯಾರ್ಥಿಯು ಗಂಭಿರ ಸ್ಥಿತಿಯಲ್ಲಿ ಇದ್ದ. ಆತನ ಹೃದಯ ಕ್ಷಣಮಾತ್ರದಲ್ಲಿ ಸ್ತಬ್ದವಾಯಿತು, ಎಲ್ಲರೀತಿಯ ಪ್ರಯತ್ನಮಾಡಿದರು ಆತನನ್ನು ನಮ್ಮಿಂದ ಉಳಿಸಿಕೊಳ್ಲಲಾಗಲ್ಲಿ.

ಉಪ್ಪು ಮತ್ತು ಹೃದಯರೋಗ

ಹೆಚ್ಚಿನ ರಕ್ತದೊತ್ತಡ ಇದ್ದ ವೈಕ್ತಿಗಳಿಗೆ  ಹೃದಯಕಾಯಿಲೆ ಮತ್ತು ಪಾರ್ಶುವಾಯು ಸಂಭವಿಸುವ ಸಾದ್ಯತೆ ಹೆಚ್ಚು, ಅದುಕ್ಕಾಗಿ ವೈದ್ಯರು ರಕ್ತದೊತ್ತಡವನ್ನು ನೀಯಂತ್ರರಣದಲ್ಲಿ ಇಡಲು ರೋಗಿಗಳಿಗೆ ಸೂಚೀಸುತ್ತಾರೆ. ಉಪ್ಪನ್ನು ಕಡಿಮೆ ಮಾಡಿದರೆ ಸಾಧರಣ ಪ್ರಮಾಣದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು, ಅದಕ್ಕಾಗಿ ರಕ್ತದೊತ್ತಡ ಹೆಚ್ಚಾದವರಿಗೆ ಉಪ್ಪನ್ನು ಕಡಿಮೆ ತಿನ್ನಲು ವೈದ್ಯರು ಹೇಳುತ್ತಾರೆ, ಇದರಂತೆ ಉಪ್ಪನ್ನು ರಕ್ತದೊತ್ತಡ ಹೆಚ್ಚಿಲ್ಲದವರು ಕಡಿಮೆ ತಿಂದರೆ ಒಳ್ಳೆಯದಾಗಬಹುದೆಂಬ ಉಹೆಯು ಸಹ ಇದೆ.